ಬಾ ಬಾ ಎಂದು ಕರೆಯುತಿದೆ..
ಬಾ ಬಾ ಎಂದು ಕೂಗುತಿದೆ..
ಕಾಣದೂರೊಂದು ಬಳಿ ಬಾ
ಎಂದು ಕೈ ಬೀಸಿ ಕರೆಯುತಿದೆ..!! :((
ಕನಸಿನೂರ ಸಂತೆ ಕರಗಿ,
ಮನಸ ತುಂಬಾ ಚಿಂತೆ ಕಾಡಿ..,
ಕೈ ಬೀಸಿ ಕರೆದ ಕಾಣದೂರು
ಬಂತೆಂದು ಮನ ಸಾರುತಿದೆ.!! :(
ಕಣ್ಣುಗಳು ಕುರುಡಾಗಿ..
ಕಿವಿಗಳು ಕಿವುಡಾಗಿ..
'ತಾಳ್ಮೆಯೇ ತಾಳ್ಮೆ'ಗೆಟ್ಟಂತಾಗಿ.
ಕಾಣದೂರು ಎದುರು ಬಂದಾಗಿದೆ..! :(
ಹರೆಯ ತುಂಬಿ ಉಕ್ಕಿ ಹರಿವ ಸಮಯ.
ಕಾಣದೂರು ಸೆಳೆದಪ್ಪಿ ಮುದ್ದಾಡುತಿದೆ.
ವಿಕಟಟ್ಟಹಾಸಗೈದು ನಗುತಿದೆ
ನನಗಾರು ಸಾಟಿಯೆಂದು..?? :'(

(ಅರ್ಪಣೆ:'ಕಾಲ'ವನ್ನೆದುರಿಸಲಾಗದೇ 'ಕಾಲ'ನಿಗೆ ಬಲಿಯಾದ ಕನ್ನಡದ ಯುವ ಪ್ರತಿಭಾನ್ವಿತ ಗಾಯಕ "ದಿ||ಆದಿತ್ಯನಾಡಿಗ್" ಅವರ ಆತ್ಮಕ್ಕೆ. ಹಾಗೂ ನೊಂದ ಎಲ್ಲಾ ಮನಸುಗಳಿಗೆ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ