ಮಂಗಳವಾರ, ನವೆಂಬರ್ 22, 2011

ಒಲವಿನಿರುಳ ಪಯಣ..!!















ಬೆಳಕೇ ಕಾಣದ ದಾರಿಯಲ್ಲಿ 
ಕಡು ಕಗ್ಗತ್ತಲೆಯಲ್ಲಿ..
ಕಣ್ಣು ಕುರುಡಾಗಿಸಿ ಹೋದ 
ಅವಳ ಅಂದಿನಾ ಒಲವು..:( ♥ 


ಇಂದಿನಿರುಳ ಅಂಧಕಾರವ ಸೀಳಿ 
ಅವಳ ಬಳಿ ಸುಳಿವಷ್ಟು.
ಸಾಮಾರ್ಥ್ಯವಾದರೂ ಹೊಂದಿದೆಯೇ 
ಇವನ ಇಂದಿನೀ ಒಲವು..?? :) ♥ ♥

ಶನಿವಾರ, ನವೆಂಬರ್ 19, 2011

ಕಾಣದೂರಿನ ಸೆಳೆತ..!!












ಬಾ ಬಾ ಎಂದು ಕರೆಯುತಿದೆ..
ಬಾ ಬಾ ಎಂದು ಕೂಗುತಿದೆ..
ಕಾಣದೂರೊಂದು ಬಳಿ ಬಾ
ಎಂದು ಕೈ ಬೀಸಿ ಕರೆಯುತಿದೆ..!! :((


ಕನಸಿನೂರ ಸಂತೆ ಕರಗಿ,
ಮನಸ ತುಂಬಾ ಚಿಂತೆ ಕಾಡಿ..,
ಕೈ ಬೀಸಿ ಕರೆದ ಕಾಣದೂರು
ಬಂತೆಂದು ಮನ ಸಾರುತಿದೆ.!! :(


ಕಣ್ಣುಗಳು ಕುರುಡಾಗಿ..
ಕಿವಿಗಳು ಕಿವುಡಾಗಿ..
'ತಾಳ್ಮೆಯೇ ತಾಳ್ಮೆ'ಗೆಟ್ಟಂತಾಗಿ.
ಕಾಣದೂರು ಎದುರು ಬಂದಾಗಿದೆ..! :(


ಹರೆಯ ತುಂಬಿ ಉಕ್ಕಿ ಹರಿವ ಸಮಯ.
ಕಾಣದೂರು ಸೆಳೆದಪ್ಪಿ ಮುದ್ದಾಡುತಿದೆ.
ವಿಕಟಟ್ಟಹಾಸಗೈದು ನಗುತಿದೆ
ನನಗಾರು ಸಾಟಿಯೆಂದು..?? :'(



(ಅರ್ಪಣೆ:'ಕಾಲ'ವನ್ನೆದುರಿಸಲಾಗದೇ 'ಕಾಲ'ನಿಗೆ ಬಲಿಯಾದ ಕನ್ನಡದ ಯುವ ಪ್ರತಿಭಾನ್ವಿತ ಗಾಯಕ "ದಿ||ಆದಿತ್ಯನಾಡಿಗ್" ಅವರ ಆತ್ಮಕ್ಕೆ. ಹಾಗೂ ನೊಂದ ಎಲ್ಲಾ ಮನಸುಗಳಿಗೆ)

ಶುಕ್ರವಾರ, ನವೆಂಬರ್ 11, 2011

‎"ವಿಜಯ ದುಂಧುಬಿ..!!"














ಬಿಟ್ಟ ಬಾಣ
ಇಟ್ಟ ಗುರಿಯನ್ನು
ಮುಟ್ಟಿಯಾಗಿದೆ..!


ಸುಳ್ಳಿನ ಬೂದಿಯು
ಹಾರಿ ಹೋಗಿದೆ..!
ಸತ್ಯದ ಕೆಂಡವು
ಝಗಮಗಿಸುತಲಿದೆ..!!


ಸೋಗಲಾಡಿಗಳ ಕನ್ನಡ
ಮುಖವಾಡ ಕಳಚಿ ಬಿದ್ದಿದೆ..!
ನಿಜ ಕನ್ನಡಿಗರ 
'ವಿಜಯ ದುಂಧುಬಿ' ಮೊಳಗುತಲಿದೆ..!


ಏರುತಲಿದೆ., ಹಾರಾಡುತಲಿದೆ.,
ಮುಗಿಲೆತ್ತರದಲ್ಲಿ ವಿಜೃಂಭಿಸುತಿದೆ.!
ಕನ್ನಡಮ್ಮನ ಕೀರ್ತಿಯ
ವಿಜಯ ಪತಾಕೆ...!!


'ರಣಹೇಡಿ'ಗಳ ಧಿಕ್ಕರಿಸಿ
'ರಣಕಲಿ'ಗಳ'ಜೈಕರಿಸಿ
ವಿಜಯವನ್ನಾಚರಿಸುತ
ಸಂಭ್ರಮಿಸೋಣ..!


ಜೈ ಭುವನೇಶ್ವರಿ..!!



ಶುಕ್ರವಾರ, ನವೆಂಬರ್ 04, 2011

Mallikarjuna's Golden Words:-

1) "ಸಜ್ಜನ ಶಿಕ್ಷಕರ ನಾಡು..,!
     ಸತ್ಪ್ರಜೆಗಳ ಬೀಡು..!!" (05/09/2011)


2)"ನೀರು ಕೆಟ್ಟು ವಾಸನೆ ಬರುವುದಕ್ಕೆ ಕಾರಣ ಅದು 
'ಜಲಧಾರೆ'ಯಂತೆ ಹರಿಯದೇ ನಿಂತಿರುವುದು..
ಸಂಬಂಧಗಳು ಹಳಸಿ ದೂರವಾಗುವದಕ್ಕೆ ಕಾರಣ 
'ಒಲವಧಾರೆ' ಹರಿಯದೇ ನಿಂತಿರುವುದು" ♥ (20/10/2011)

Mallikarjuna's Punch Line:-

1)ಎಲ್ರನ್ನೂ Friends ಮಾಡ್ಕೊಳ್ಳಿ ಅಂತಾ ಹೇಳೋ ಜನ
ಹುಡುಗ ಹುಡುಗಿ Friends ಆಗಿದ್ರೂ ಬೇರೇನೇನೋ ಹೇಳ್ತಾರೆ.. :) (07/08/2011)

2)"ಕಣ್ಣಲ್ ಹುಟ್ಟೋ ಪ್ರೀತಿ  'ಕಣ್ಮರೆ'ಯಾಗೋತನಕ..,
ಮನಸಲ್ಲ್ ಹುಟ್ಟೋ ಪ್ರೀತಿ 'ಹೃದಯದ ಬಡಿತ' ನಿಲ್ಲೋ ತನಕ" ♥ ♥ :-)) (19/09/2011)

3)"ಪ್ರೀತಿಯ ತಳಹದಿಯೇ ಸ್ನೇಹ" So..,
ಪ್ರೀತಿ ತುಂಬಿದ ಸ್ನೇಹ ಒಬ್ಬರಿಗೇ ಮೀಸಲು ♥ ♥ 
ಸ್ನೇಹ ತುಂಬಿದ ಪ್ರೀತಿ ಎಲ್ಲರಿಗೂ ಹಂಚಲು" :-) (22/09/2011)

4)"ಮಳೆ 'ಬರದ ನಾಡು'ಎಂದರೆ..??
    ಅದು 'ಬರದ ನಾಡು'ಎಂದೇ ಅರ್ಥ..":-) (11/10/2011)

5)"ಅಂದು:-
ನಮ್ಮ ಮೆಟ್ರೋ.., ಬೇಗ ಕಟ್ರೋ...!
ಇಂದು:-
ನಮ್ಮ ಮೆಟ್ರೋ.., ಬೇಗ ಹತ್ರೋ..!!" :-) (20/10/2011)

6)"ನಿರ್ಮಲ ಪ್ರೀತಿಯಲ್ಲಿರಬೇಕಾದ್ದು
'ತ್ಯಾಗ' ಮತ್ತು 'ಸಮರ್ಪಣೆ'ಯೇ ಹೊರತು, ♥ ♥
'ಸ್ವಾರ್ಥ' ಮತ್ತು 'ಪ್ರತಿಫಲ'ದ ನಿರೀಕ್ಷೆಯಲ್ಲ.." :) (04/11/2011)


7)"ಸಮರ್ಥಿಸುವದಾಗಲೀ.,
ವಿರೋಧಿಸುವದಾಗಲೀ.,
ಅದು ವ್ಯಕ್ತಿಯ ಧೋರಣೆಯನ್ನವಲಂಬಿಸಿರಬೇಕೇ ವಿನಃ
ಕೇವಲ ವ್ಯಕ್ತಿಯನ್ನವಲಂಬಿಸಿರಬಾರದು..!" (10/11/2011)


8)"ಪರಿಚಯವಿರುವ ಕೃತಿಚೌರ್ಯದ ಸ್ನೇಹಿತ ಕು-ಕವಿಗಳಿಗಿಂತ,!
ಪರಿಚಯವಿಲ್ಲದ ಸೃಜನಶೀಲ ನೈಜ ಕವಿಯನ್ನು ನಂಬುವುದೇ ಲೇಸು.!!" (11/11/2011)


9)"'ಹಿತಶತ್ರು'ಗಳ ನಯವಂಚನೆಯ 'ಸವಿ ಮಾತು'ಗಳಿಗಿಂತ.,
'ಕಡು ಶತ್ರು'ವಿನ ಸತ್ಯದ 'ಕಟು ನುಡಿ'ಗಳನ್ನಾಲಿಸುವುದೇ ಮೇಲು..!!" (11/11/2011)


10)"'ಸಮಯಸಾಧಕ' ನೂರು ಜನ ದುಷ್ಟ ಸ್ನೇಹಿತರಿಗಿಂತ.
'ಸಮಯ ಸ್ಪೂರ್ತಿ'ಯ ಒಬ್ಬ ಶಿಷ್ಠ ಸ್ನೇಹಿತನೇ ವಾಸಿ..!"
(11/11/2011)


11) "ಕಲ್ಪನೆಯೆಂದರಿತೂ ವಾಸ್ತವವಾಗಿ ಓದುವ ಸಹೃದಯರು ಚೆನ್ನ,,
ವಾಸ್ತವವೆಂದರಿತೂ ಕಲ್ಪನೆ ಎಂದೇಳುವ ಕವಿ ಹೃದಯ ಚೆನ್ನ..!" :) ♥
(15/11/2011)

‎"ಪ್ರೇಮ ಪಾಠ"












"ಬರೆದೆ ನಾನೊಂದು ಹಾಳೆಯ ಮೇಲೆ  
ಅವಳ ಕುರಿತಾದ ಭಾವನೆಯ.,
ಬರೆದಾದ ಮೇಲರಿವಿಗೆ ಬಂತು 
ಅದಾಗಿದೆ ಪ್ರೇಮ ಪತ್ರವೆಂದು. <3

ಆದರೂ ಕೊಟ್ಟೆ ಅವಳಿಗಾ ಪತ್ರವ 
ನನ್ನೆಲ್ಲಾ ಕನಸುಗಳ ತುಂಬಿ.. :)
ಅವಳೇನು ಮಾಡಿಬಿಟ್ಟಳು..???? 
ನೋಡದೇ ಗಾಳಿಯಲಿ ತೂರಿಬಿಟ್ಟಳು..!! :'(

ಅರಿಯಲಿಲ್ಲವಳು ಅದು ಬರಿ ಪತ್ರವಾಗಿರದೇ
ನನ್ನ ಹೃದಯವಾಗಿತ್ತೆಂದು..!!
ಕಣ್ತೆರೆದು ನೋಡಲಿಲ್ಲವಳು ನನ್ನೀ ಹೃದಯ 
ಒಡೆದು ಚೂರಾಗಿ ರೋಧಿಸುತ್ತಿರುವದೆಂದು..!!

ಪ್ರೀತಿಗೆ ಕಣ್ಣಿಲ್ಲವೆಂದರಿತ್ತಿದ್ದೆ 
ನಾನೆಂದೋ..??
ಪ್ರೀತಿಸುವವರಿಗೂ ಕಣ್ಣಿಲ್ಲವೆಂದರಿತೆ 
ನಾನಿಂದು..!!"

ಪ್ರೀತಿ-ಪ್ರೇಮಗಳೇ ಹೀಗೇನೋ..??
ಬರೀ ಪಾಠಗಳೇ ತುಂಬಿವೆಯೇನೋ..??